ಹೀಗೆ 'ಏನೋ ಒಂದು' ಹೇಳಬೇಕೆನಿಸುವ ಮಾತುಗಳು,ಹಲವು ಸಣ್ಣ ಪುಟ್ಟ ಕಥೆಗಳು,ಕೆಲವು ಉದ್ದದ ಕಥೆಗಳು,ಅರಬ್ಬಿಯ ಭೋರ್ಗರೆತದೊಳಗಿರುವ ಮೌನಕ್ಕೆ ಕಿವಿಯಾದರೆ ನೀವು,ನನ್ನದೇ ಅನುಭವದ ಕಥೆಗಳನ್ನು ಕೂಡ ಹೇಳುವ ಫಲ್ಗುಣಿ ತೀರದ ಹುಡುಗ 'ಪಚ್ಚು' ನಾನು..
ಆಡಿನ ಕೊಂಬಿನಲ್ಲಿ ಇಷ್ಟಿಷ್ಟೇ ಸಾರಾಯಿಯನ್ನು(ale) ಸುರಿದು ಕೊಂಡು,ಪರಸ್ಪರ 'Skol..'(cheers) ಎನ್ನುತ್ತಾ,ಅದನ್ನೇ ಪದೇ ಪದೇ ಕುಡಿಯುವ ಅವರು... ಇಡೀ ಕಥೆಯಲ್ಲಿ ನೀರು ಕುಡಿದದ್ದೇ ಬಹಳ ಕಡಿಮೆ..! ಕೆಲವೊಮ್ಮೆ ಬಲಿ ನೀಡಿದ ಪ್ರಾಣಿಗಳ ರಕ್ತವನ್ನೂ ಸಹ ಹಾಗೇ ಗಟ ಗಟನೆ ಎಂದು ಕುಡಿದು ಬಿಡುವ ಅವರಿಗೆ.. ಅದೇ ಸಂಪ್ರದಾಯ,ಸಂಸ್ಕೃತಿ & Ritual..! ತಮ್ಮ ಪ್ರಕೃತಿ ದೇವರನ್ನು(Odin, Frigg, Thor, Loki)ಮೆಚ್ಚಿಸಲು,ಅವರ Valhalla ದ ವಿಶಾಲ ಹಾಲ್ ನಲ್ಲಿ ಶಾಶ್ವತವಾದ ಸ್ಥಾನವೊಂದನ್ನು ಪಡೆಯಲು,ಸ್ವ ಇಚ್ಛೆಯಿಂದ ದೇವರಿಗೆ ತಾವೇ ಬಲಿಯಾಗುವ,ಇಲ್ಲವೇ ಯುದ್ಧ ಭೂಮಿಯಲ್ಲಿ ಯುದ್ಧ ಮಾಡುತ್ತಲೇ ಸಾಯಲು ಇಷ್ಟಪಡುವ... ಅವರು ಕೂಡ ನಮ್ಮಂತೆ ನಿಮ್ಮಂತೆ ನರರೇ,ನರ ಭಕ್ಷಕರಂತು ಖಂಡಿತವಾಗಿಯೂ ಅಲ್ಲವೇ ಅಲ್ಲ! ಭೂಮಿಯಲ್ಲಿಯೇ ಸಾಮ್ರಾಜ್ಯ ಕಟ್ಟಿಕೊಂಡರೂ ಕೂಡ ನಾವೆಯೊಂದನ್ನು ಕಟ್ಟಿಕೊಂಡು ಸಾಗರದ ತೋಳುಗಳ ಮೇಲೆ ತೇಲುತ್ತಾ ತೇಲುತ್ತಾ ಬಹುದೂರ ಸಾಗಿ,ಭೂಮಿ ಸಿಕ್ಕಲೆಲ್ಲಾ ದಾಳಿ ಮಾಡಿ ಕೈಗೆ ಸಿಕ್ಕಿದ್ದನು ದೋಚುವ,ಜೀವದ ಹಂಗು ತೊರೆದು ಯುದ್ಧ ಮಾಡುವ ಆ ಗಡಸು ವ್ಯಕ್ತಿತ್ವದ ಜನರ ಹೆಸರೇ #Vikings! ಅವರ ಕಾನೂನುಗಳೇ ಬೇರೆ...! ದೇವರೇ ಬೇರೆ,ಆಚರಣೆಗಳೇ ಬೇರೆ...! ಆಕಾಂಕ್ಷೆಗಳೇ ಬೇರೆ.. ಮಹತ್ವಾಕಾಂಕ್ಷೆಗಳೇ ಬೇರೆ!! ಡೆನ್ಮಾರ್ಕ್,ಸ್ವೀಡನ್ ಮತ್ತು ನಾರ್ವೆ ಯಲ್ಲಿ ಸುಮಾರು 8 ನೇ ಶತಮಾನದಿಂದ 11 ನೇ ಶತಮಾನದವರೆಗೆ ಇದ್ದವರ ಕಥೆಯೇ
ನಿನಗೆ ಹಣೆಗೆ ಬಿಂದಿ ಹಚ್ಚಿಕೊಳ್ಳಲು ಆ ಆಫೀಸಿನಲ್ಲಿ ಅದೆಷ್ಟೋ ಗಾಜಿನ ಗೋಡೆಗಳಿದ್ದವು. ಆದರೂ ನೀನು ನನ್ನೆದುರು ಇದ್ದ ಗಾಜಿನ ಮುಂದೆಯೇ ಪ್ರತೀ ಸಲವೂ ಬಂದು ನಿಲ್ಲುತ್ತಿದ್ದೆ. ಏಕೆ? ಅದೂ ಕೂಡ ನಾನು ಆ ಒಂದು ಗಾಜಿನ ಮತ್ತೊಂದು ಬದಿಯಲ್ಲಿ ಬಂದು ಎಲ್ಲೆಲ್ಲೋ ನೋಡಿಕೊಂಡು ನನ್ನಷ್ಟಕ್ಕೆ ನಿಂತುಕೊಂಡ ಮರುಘಳಿಗೆಯಲ್ಲೇ! ಸಂಪೂರ್ಣ ಪಾರದರ್ಶಕ ಗಾಜದು. ಆ ಕೋಣೆಯ ನೀನು, ಈ ಕೋಣೆಯ ನಾನು, ನೀನು ಬಂದು ನಿಂತ ಆ ಕ್ಷಣಕ್ಕೆ ನಾವಿಬ್ಬರು ಅಲ್ಲೇ ಪರಸ್ಪರ ಎದುರುಬದುರು. ಸರಿಯಾಗಿ ಬಿಂಬವೇ ಮೂಡದ ಅಂತಹದ್ದೊಂದು ಗಾಜಲ್ಲಿ ಏನನ್ನು ನೋಡಿಕೊಂಡು ಹಣೆಯ ಬಿಂದಿಯನ್ನು ಅಷ್ಟೊಂದು ಸರಿಯಾಗಿ, ಸಲೀಸಾಗಿ ಹಣೆಯ ನಡುವಿಗೆ ಸಿಕ್ಕಿಸಿಕೊಳ್ಳುತ್ತಿದ್ದೆ ನೀನು. ನಿನ್ನ ಈ ವರ್ತನೆಯಿಂದ ವಿಲವಿಲ ಎಂದು ಒದ್ದಾಡಿ ಬಿಟ್ಟ ನನ್ನ ಕಣ್ಣ ಫಳಫಳ ಗಾಜನ್ನು ನೋಡಿಯೇ? ಬರೀ ಅಷ್ಟೇ ಆಗಿದ್ದರೆ ನಾನಂದು ಅಷ್ಟೊಂದು ಸೋಲುತ್ತಿರಲಿಲ್ಲ. ಬಿಂದಿ ಅಂಟಿಸುತ್ತಲೇ ಇದೊಂದು ಹಾಡಿನ ಸಾಲನ್ನು ಕೂಡ ಮೆಲ್ಲಗೆ ಗುನುಗಿ ಬಿಟ್ಟಿದ್ದೆ ನೀನು ... " ಗಗನದ ಸೂರ್ಯ ಮನೆ ಮೇಲೆ, ನೀ ನನ್ನ ಸೂರ್ಯ ಹಣೆ ಮೇಲೆ ಚಿಲಿಪಿಲಿ ಹಾಡು ಎಲೆ ಮೇಲೆ ನಿನ್ನ ಪ್ರೀತಿ ಹಾಡು ಎದೆ ಮೇಲೆ.... " ಅಮೃತವರ್ಷಿಣಿಯ ಹಾಡದು. ಆದರೆ ಏಕೆ? ಯಾರಿಗಾಗಿ! ನೀನದನ್ನು ನನ್ನೆದುರು ಗುನುಗಬಾರದಿತ್ತು ಪುನರ್ವಸು!! ಆಮೇಲೆಯೂ ನಾನು ಗಾಜಿನೆದುರು ಬಂದಾಗಲೆಲ್ಲ ನೀನು ಮತ್ತೊಂದು ಬದಿಯಲ್ಲಿ ನಿಂತು ನಿನ್ನ ಹಣೆಗೆ ಬಿ
#ನೀಲಮೇಘ ( ಪಯ್ಯನ ಪರಾಕ್ರಮ ) ಒಂದು ಮದುವೆಗೆ ಹೋಗಿದ್ದೆ.ಕೇವಲ ಅಷ್ಟೇ ಹೇಳಿ ಬಿಟ್ಟರೆ ಅದು ನನಗೆ ನಾನೇ ಮಾಡಿಕೊಳ್ಳುವ ಮೋಸ,ವಂಚನೆ ಹಾಗೂ ಬಹುತ್ ಬಡಾ ದ್ರೋಹ.ಮದುವೆ ಊಟಕ್ಕೆಂದೇ ಹೋಗಿದ್ದೆ ಎಂದು ಮುಜುಗರವಿಲ್ಲದೆ ನೇರವಾಗಿ ಹೇಳಿ ಬಿಟ್ಟರೆ ಆಗ ನಾನು ಬಹಳಷ್ಟು ನಾನೇ ಎಂದು ಅನ್ನಿಸಿಕೊಳ್ಳುತ್ತೇನೆ. ಊಟ ನಿಜಕ್ಕೂ ಚೆನ್ನಾಗಿರಲಿಲ್ಲ.ಎಷ್ಟೇ ಆಡಂಬರದಲ್ಲಿ ಮದುವೆ ಮಾಡಿದರೂ,ವರ ಕುದುರೆಯಲ್ಲಿಯೇ ಜಿಗಿದು ಕುಣಿದು ಕುಪ್ಪಳಿಸಿ ಮದುವೆಯ ಹಾಲಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟರೂ,ಕೆಜಿಗಟ್ಟಲೆ ಬಂಗಾರವನ್ನು ತೊಡಿಸಿ ವಧುವಿಗೆ ಒಂದು ರೀತಿಯ ದೈಹಿಕ ಹಲ್ಲೆ ಮಾಡಿಬಿಟ್ಟರೂ,'ಆಶೀರ್ವಾದವೇ ಉಡುಗೊರೆ' ಎಂದು ಲಗ್ನಪತ್ರಿಕೆಯ ಕೆಳಗೆ ದಪ್ಪ ಅಕ್ಷರಗಳಲ್ಲಿ ಎದ್ದುಕಾಣುವಂತೆ ಬರೆಸಿಕೊಂಡರೂ ಈ ಮದುವೆಯ ಊಟ ಒಂದು ಚೆನ್ನಾಗಿರದೆ ಹೋದರೆ,ಚೆನ್ನಾಗಿದ್ದರೂ ಮಾಡಿಟ್ಟ ಊಟವನ್ನು ಸರಿಯಾಗಿ ಸಮರ್ಪಕವಾಗಿ ಎಲ್ಲರಿಗೂ ಬಡಿಸದಿದ್ದರೆ ಆಗ ಆ ಅದ್ದೂರಿ ಸಂಭ್ರಮಕ್ಕೆನೇ ಅದೊಂದು ಕಪ್ಪು ಚುಕ್ಕೆ. ಆಗ ಮದುವೆ ಊಟಕ್ಕೆ ಬಂದವರು ವಧುವರರಿಗೆ ಮನಸಾರೆ ಹರಸದಿದ್ದರೂ ಹಿಡಿ ಶಾಪ ಹಾಕಲು ಮಾತ್ರ ಹಿಂದೆ ಮುಂದೆ ನೋಡುವುದೇ ಇಲ್ಲ.ಎಲ್ಲರೂ ವರ ಬಲದಿಂದ ಮೆರೆಯುವ ಸಿದ್ದಿಪುರುಷರಂತೆ ನಾ ಮುಂದು ತಾ ಮುಂದು ಶಾಪ ಕೊಟ್ಟು ಮದುವೆ ಮನೆಯವರನ್ನು ಶಾಪಗ್ರಸ್ತರನ್ನಾಗಿ ಮಾಡಲು ಕ್ಯೂ ನಿಂತು ಬಿಡುತ್ತಾರ
Comments
Post a Comment