ಅಪ್ಪನೂ ಅಳುತ್ತಾನೆ

 

ಬತ್ತದ ಗದ್ದೆಯ ಮುಂದೆ 

ಮನಸ್ಸು ಹೇಳಿತು

ಬಂಗಾರ ಕೊಳ್ಳಬಾರದು

ಬೆಳೆಯ ಬೇಕು


* * * * * * * * * * * * * * * * * *


ಜೇಡ ಬಲೆ ಹೆಣೆದಾಗ

ಇಬ್ಬನಿ ಮುತ್ತಾಯಿತು

ಚಿಟ್ಟೆ ಭೋಜನವಾಯಿತು


* * * * * * * * * * * * * * * * * *


ಕಾವ್ಯ ಬರೆದಾಗ ಬರಲಿಲ್ಲ

ಪ್ರೀತಿಸಿದಾಗ

ಕವಿತೆಯಾಗಿ ಉಳಿದಳು


* * * * * * * * * * * * * * * * * *


ಗಡಿಗೆಯಲ್ಲಿ ತುತ್ತು ಅನ್ನವಿದ್ದಾಗ 

ಮಗು ಹಟ ಮಾಡದೇ ಎಲ್ಲವನ್ನೂ ತಿಂದಿತು

ಅಮ್ಮನಿಗೆ ಹಸಿವೆಯೇ  ಆಗಲಿಲ್ಲ


* * * * * * * * * * * * * * * * * *


ಕನ್ಯಾದಾನ ನಡೆದಂದು 

ಭೂರಿ ಭೋಜನ ಸೊಗಸಿತ್ತು

ತಂದೆಯ ಕಣಲ್ಲಿ ಚೊಂಬು ನೀರಿತ್ತು


* * * * * * * * * * * * * * * * * *


#ಹಿತವಾಗಿ_ಹದವಾಗಿ

ab pacchu

moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ