ಹೀಗೆ 'ಏನೋ ಒಂದು' ಹೇಳಬೇಕೆನಿಸುವ ಮಾತುಗಳು,ಹಲವು ಸಣ್ಣ ಪುಟ್ಟ ಕಥೆಗಳು,ಕೆಲವು ಉದ್ದದ ಕಥೆಗಳು,ಅರಬ್ಬಿಯ ಭೋರ್ಗರೆತದೊಳಗಿರುವ ಮೌನಕ್ಕೆ ಕಿವಿಯಾದರೆ ನೀವು,ನನ್ನದೇ ಅನುಭವದ ಕಥೆಗಳನ್ನು ಕೂಡ ಹೇಳುವ ಫಲ್ಗುಣಿ ತೀರದ ಹುಡುಗ 'ಪಚ್ಚು' ನಾನು..
ನಿನಗೆ ಹಣೆಗೆ ಬಿಂದಿ ಹಚ್ಚಿಕೊಳ್ಳಲು ಆ ಆಫೀಸಿನಲ್ಲಿ ಅದೆಷ್ಟೋ ಗಾಜಿನ ಗೋಡೆಗಳಿದ್ದವು. ಆದರೂ ನೀನು ನನ್ನೆದುರು ಇದ್ದ ಗಾಜಿನ ಮುಂದೆಯೇ ಪ್ರತೀ ಸಲವೂ ಬಂದು ನಿಲ್ಲುತ್ತಿದ್ದೆ. ಏಕೆ? ಅದೂ ಕೂಡ ನಾನು ಆ ಒಂದು ಗಾಜಿನ ಮತ್ತೊಂದು ಬದಿಯಲ್ಲಿ ಬಂದು ಎಲ್ಲೆಲ್ಲೋ ನೋಡಿಕೊಂಡು ನನ್ನಷ್ಟಕ್ಕೆ ನಿಂತುಕೊಂಡ ಮರುಘಳಿಗೆಯಲ್ಲೇ! ಸಂಪೂರ್ಣ ಪಾರದರ್ಶಕ ಗಾಜದು. ಆ ಕೋಣೆಯ ನೀನು, ಈ ಕೋಣೆಯ ನಾನು, ನೀನು ಬಂದು ನಿಂತ ಆ ಕ್ಷಣಕ್ಕೆ ನಾವಿಬ್ಬರು ಅಲ್ಲೇ ಪರಸ್ಪರ ಎದುರುಬದುರು. ಸರಿಯಾಗಿ ಬಿಂಬವೇ ಮೂಡದ ಅಂತಹದ್ದೊಂದು ಗಾಜಲ್ಲಿ ಏನನ್ನು ನೋಡಿಕೊಂಡು ಹಣೆಯ ಬಿಂದಿಯನ್ನು ಅಷ್ಟೊಂದು ಸರಿಯಾಗಿ, ಸಲೀಸಾಗಿ ಹಣೆಯ ನಡುವಿಗೆ ಸಿಕ್ಕಿಸಿಕೊಳ್ಳುತ್ತಿದ್ದೆ ನೀನು. ನಿನ್ನ ಈ ವರ್ತನೆಯಿಂದ ವಿಲವಿಲ ಎಂದು ಒದ್ದಾಡಿ ಬಿಟ್ಟ ನನ್ನ ಕಣ್ಣ ಫಳಫಳ ಗಾಜನ್ನು ನೋಡಿಯೇ? ಬರೀ ಅಷ್ಟೇ ಆಗಿದ್ದರೆ ನಾನಂದು ಅಷ್ಟೊಂದು ಸೋಲುತ್ತಿರಲಿಲ್ಲ. ಬಿಂದಿ ಅಂಟಿಸುತ್ತಲೇ ಇದೊಂದು ಹಾಡಿನ ಸಾಲನ್ನು ಕೂಡ ಮೆಲ್ಲಗೆ ಗುನುಗಿ ಬಿಟ್ಟಿದ್ದೆ ನೀನು ... " ಗಗನದ ಸೂರ್ಯ ಮನೆ ಮೇಲೆ, ನೀ ನನ್ನ ಸೂರ್ಯ ಹಣೆ ಮೇಲೆ ಚಿಲಿಪಿಲಿ ಹಾಡು ಎಲೆ ಮೇಲೆ ನಿನ್ನ ಪ್ರೀತಿ ಹಾಡು ಎದೆ ಮೇಲೆ.... " ಅಮೃತವರ್ಷಿಣಿಯ ಹಾಡದು. ಆದರೆ ಏಕೆ? ಯಾರಿಗಾಗಿ! ನೀನದನ್ನು ನನ್ನೆದುರು ಗುನುಗಬಾರದಿತ್ತು ಪುನರ್ವಸು!! ಆಮೇಲೆಯೂ ನಾನು ಗಾಜಿನೆದುರು ಬಂದಾಗಲೆಲ್ಲ ನೀನು ಮತ್ತ...
ತೆರೆಮರೆಗೆ ಸರಿದಿರುವ ಒಂದು ನಿಗೂಢ ಸಾವಿನ ಸುತ್ತ ನಡೆಯುತ್ತದೆ ಇದರ ಕಥೆ. ಕಥೆಯ ಶುರುವಲ್ಲಿಯೇ ಒಂದು ಆತ್ಮಹತ್ಯೆ ಆಗುತ್ತದೆ..! ಆಮೇಲೆ ಒಂದರ ನಂತರ ಒಂದರಂತೆ ಒಟ್ಟು ಮೂರು ಆತ್ಮಹತ್ಯೆ ನೋಡು ನೋಡುತ್ತಿದ್ದಂತೆ ಆಗಿಯೇ ಬಿಡುತ್ತದೆ !! ಅದೂ ಕೂಡ ಒಂದೇ ಮನೆಯಲ್ಲಿ..! ನೋಡಲು ಆತ್ಮಹತ್ಯೆ ಎಂದೇ ಕಾಣುವ ಅದು ಆತ್ಮಹತ್ಯೆ ಅಲ್ಲ! ಕಥೆ ಆರಂಭವಾದ ಇಪ್ಪತ್ತು ನಿಮಿಷದಲ್ಲಿಯೇ ಕೊಲೆಗಾರ ಕೂಡ ಸಿಕ್ಕಿ ಬಿಡುತ್ತಾನೆ. ಆದರೆ ಇದು ಮೂವಿಯ ಮುಖ್ಯ ಕಥೆ ಅಲ್ಲ!! ಇನ್ನೇನು ಕಥೆ ಈ ಮೂವಿಯಲ್ಲಿ ಉಳಿದಿದೆ ಎಂದು ನೋಡುಗ ತಡಕಾಡುವಾಗಲೇ.... ಶುರುವಾಗುವುದು ಮೂವಿಯ ಅಸಲಿ ಕಥೆ..! ಯೆಸ್...Para Normal Activity ಯ ಕಥೆ! ಆ ಕಥೆ ಹೇಳಲ್ಲ.. ನೀವೇ ನೋಡಬೇಕು. ಇಂತಹ ಕಥೆಗಳಲ್ಲಿ ನಟರ ನಟನೆಗಿಂತಲೂ ಹಿನ್ನಲೆ ಸಂಗೀತವೇ ಒಂದು ಬಹು ಮುಖ್ಯ ಪಾತ್ರವಾಗಿ ನೋಡುಗನಲ್ಲಿ ಭಯ ಹುಟ್ಟಿಸಿ,ಬೆಚ್ಚಿ ಬೀಳಿಸಬೇಕು. ಆಗಲೇ Horror Mystery ಗೊಂದು ಕಳೆ ಬರುವುದು,ನಿಧಾನಕ್ಕೆ ಹುಟ್ಟಿಕೊಳ್ಳುವ ಭಯ.. ತೀವ್ರವಾಗಿ ಹೆಚ್ಚಾಗುತ್ತಾ ಹೋಗುವುದು! ಇದೆ.. ಅಂತಹದ್ದೊಂದು Background score ಇದಕ್ಕೆ ಇದೆ! ಉದ್ದ ಕೋಟು,ತಲೆಗೊಂದು ಹ್ಯಾಟು,ಜೊತೆಗೊಂದು ಸದಾ ಹಿಂಬಾಲಿಸುವ ನಾಯಿ.. Mammootty ನಿಮಗೂ ಇಷ್ಟ ಆಗಬಹುದು. ಮಾರ್ಚ್ 2021 ರಲ್ಲಿ ಬಂದಂತಹ ಈ Supernatural Horror mystery...
ಬ್ರೇಕು ಗಾಡಿಗೆ ಮಾತ್ರ ಇರಬೇಕು, ಕನಸಿಗೆ ಇರಬಾರದು. ಹಾಗಂತ ಅಂದುಕೊಂಡರೂ.. ಒಳ್ಳೆಯ ಕನಸಿಗೆ ಮುಂಜಾನೆ ಎಂಬುವುದು ಒಂಥರಾ ಇಷ್ಟವಿಲ್ಲದ ಬ್ರೇಕ್ ಇದ್ದ ಹಾಗೆ. ರಾತ್ರಿ ಬಹಳ ಚಂದದ ಕನಸ್ಸು ಬಿದ್ದಿತ್ತು. ಕನಸಿನಲ್ಲಿ ನನ್ನ ನೇತೃತ್ವದಲ್ಲಿ ಕೊಡಪಾನ ಹಿಡಿದುಕೊಂಡು ನಮ್ಮ ಹಳ್ಳಿಯ ಮಹಿಳೆಯರು ನಡೆಸಿದ "ನೀರಿಗಾಗಿ ಪ್ರಾಣ ಕೊಡುವೆವು" ಎಂಬ ಉಗ್ರ ಪ್ರತಿಭಟನೆ ಕೈ ಮೀರಿ ಅತ್ಯುಗ್ರ ಹಂತಕ್ಕೆ ತಲುಪಿ,ನೀರಿಗಾಗಿ ತಮ್ಮ ಪ್ರಾಣ ಕೊಡುತ್ತೇವೆ ಎಂದು ಬಂದಿದ್ದ ಮಹಿಳೆಯರೇ ಸ್ವತಃ ತಮ್ಮ ಕೊಡಪಾನದಿಂದ ಪಂಚಾಯಿತಿ ಅಧ್ಯಕ್ಷ ಹಾಗೂ ಸದ್ಯಸರುಗಳಿಗೆ ಚೆನ್ನಾಗಿ ಥಳಿಸಿ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದು ಮಾತ್ರವಲ್ಲ ಅವರುಗಳ ಪ್ರಾಣ ತೆಗೆಯುವ ರೇಂಜಿಗೆಯೇ ನಮ್ಮ "ನೀರಿಗಾಗಿ ಪ್ರಾಣ ಕೊಡುವೆವು" ಎಂಬ ಉಗ್ರ ಪ್ರತಿಭಟನೆ ತಲುಪಿತ್ತು. ಕೊನೆಗೆ ನಮ್ಮ ಈ ರೀತಿಯ ಉಗ್ರ ಪ್ರತಿಭಟನೆಗೆ ದಂಗಾಗಿ,ಭಯ ಬಿದ್ದು... ಊರಿನ ನೀರಿನ ಸಮಸ್ಯೆಯನ್ನು ಆದಷ್ಟು ಬೇಗ ಪರಿಹಾರ ಮಾಡಿಕೊಡುತ್ತೇವೆ ಎಂಬ ಭರವಸೆ ಕೂಡ ಪಂಚಾಯಿತಿ ಅಧ್ಯಕ್ಷರಿಂದ ಸಿಕ್ಕಿ ಬಿಟ್ಟಿತ್ತು.ಮಹಿಳೆಯರು ಕೊನೆಯಲ್ಲಿ "ನೀಲಮೇಘನಿಗೆ.... ಜೈ", "ನೀಲುವಿಗೆ.... ಜೈ" , " ಮಣ್ಣಿನ ಮಗ ನೀಲುವಿಗೆ... ಜೈ", " ಸಮಾಜ ಸುಧಾರಕ - ಬಡವರ ಬಂಧು - ಆಕಾಶದೀಪ - ಆಶಾಕಿರಣ ನೀಲುವಿಗೆ... ಜೈ" ಅಂತೆಲ್ಲಾ ಸಿಕ್ಕಾಪಟ್ಟೆ ಘೋಷಣೆ ಕೂಗುತ್ತಾ ಖುಷಿಯಿ...
Comments
Post a Comment