ಬೆಣ್ಣೆ ಅಂದರೆ ಕೃಷ್ಣ
ಅಮ್ಮ ಕೇವಲ ಬಡಿಸುವುದಿಲ್ಲ
ಪ್ರೀತಿಯನ್ನು ಸೇರಿಸಿಯೇ ಬಡಿಸುತ್ತಾಳೆ
ಹುಡುಕಾಡಿದರೆ ಅಡುಗೆ ಮನೆಯ ಯಾವ
ಡಬ್ಬದಲ್ಲೂ ನನಗೆ ಪ್ರೀತಿ ಸಿಗಲೇ ಇಲ್ಲ.
* * * * * * * * * * * * * * * * * *
ಬೇರೆನು ಆಸೆ ಇಲ್ಲ,ಸಪ್ತಮಿಗೆ
ಗಡಿಗೆ ಬೆಣ್ಣೆ ಸಿದ್ದಪಡಿಸಬೇಕು
ಜನ್ಮಾಷ್ಟಮಿಗೆ ಕೃಷ್ಣ
ಬಂದೇ ಕದಿಯಬೇಕು
* * * * * * * * * * * * * * * * * *
ಇಷ್ಟವಾಗುವ ಮಳೆ ಕೂಡ
ಬೇಡ ಅಂತ ಅನಿಸೋದು ನೆನೆದು
ನಿಂತಿರೋ ಗಂಡು ನವಿಲುಗಳನ್ನು
ನೋಡವಾಗ ಮಾತ್ರ
* * * * * * * * * * * * * * * * * *
ಪ್ರೀತಿಸಿದವರೆಲ್ಲರು ಮದುವೆ
ಆಗುತ್ತಾರೆ ಎನ್ನುವುದೇ ನಿಜ ಆಗಿದ್ದರೆ
ಈಗ ಅವನಿಗೆ ಮೂರು ಹೆಂಡತಿಯರು
ಅವಳಿಗೆ ನಾಲ್ಕು ಗಂಡಂದಿರು
* * * * * * * * * * * * * * * * * *
ನಾವು ನೀವೆಲ್ಲಾ
ಸಾಯುವುದು
ಯೋಧರು ಅಮರರಾಗುವುದು
* * * * * * * * * * * * * * * * * *
ಹಿತವಾಗಿ ಹದವಾಗಿ
ab pacchu
moodubidire

Comments
Post a Comment