ಬ್ರೇಕು ಗಾಡಿಗೆ ಮಾತ್ರ ಇರಬೇಕು, ಕನಸಿಗೆ ಇರಬಾರದು. ಹಾಗಂತ ಅಂದುಕೊಂಡರೂ.. ಒಳ್ಳೆಯ ಕನಸಿಗೆ ಮುಂಜಾನೆ ಎಂಬುವುದು ಒಂಥರಾ ಇಷ್ಟವಿಲ್ಲದ ಬ್ರೇಕ್ ಇದ್ದ ಹಾಗೆ. ರಾತ್ರಿ ಬಹಳ ಚಂದದ ಕನಸ್ಸು ಬಿದ್ದಿತ್ತು. ಕನಸಿನಲ್ಲಿ ನನ್ನ ನೇತೃತ್ವದಲ್ಲಿ ಕೊಡಪಾನ ಹಿಡಿದುಕೊಂಡು ನಮ್ಮ ಹಳ್ಳಿಯ ಮಹಿಳೆಯರು ನಡೆಸಿದ "ನೀರಿಗಾಗಿ ಪ್ರಾಣ ಕೊಡುವೆವು" ಎಂಬ ಉಗ್ರ ಪ್ರತಿಭಟನೆ ಕೈ ಮೀರಿ ಅತ್ಯುಗ್ರ ಹಂತಕ್ಕೆ ತಲುಪಿ,ನೀರಿಗಾಗಿ ತಮ್ಮ ಪ್ರಾಣ ಕೊಡುತ್ತೇವೆ ಎಂದು ಬಂದಿದ್ದ ಮಹಿಳೆಯರೇ ಸ್ವತಃ ತಮ್ಮ ಕೊಡಪಾನದಿಂದ ಪಂಚಾಯಿತಿ ಅಧ್ಯಕ್ಷ ಹಾಗೂ ಸದ್ಯಸರುಗಳಿಗೆ ಚೆನ್ನಾಗಿ ಥಳಿಸಿ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದು ಮಾತ್ರವಲ್ಲ ಅವರುಗಳ ಪ್ರಾಣ ತೆಗೆಯುವ ರೇಂಜಿಗೆಯೇ ನಮ್ಮ "ನೀರಿಗಾಗಿ ಪ್ರಾಣ ಕೊಡುವೆವು" ಎಂಬ ಉಗ್ರ ಪ್ರತಿಭಟನೆ ತಲುಪಿತ್ತು. ಕೊನೆಗೆ ನಮ್ಮ ಈ ರೀತಿಯ ಉಗ್ರ ಪ್ರತಿಭಟನೆಗೆ ದಂಗಾಗಿ,ಭಯ ಬಿದ್ದು... ಊರಿನ ನೀರಿನ ಸಮಸ್ಯೆಯನ್ನು ಆದಷ್ಟು ಬೇಗ ಪರಿಹಾರ ಮಾಡಿಕೊಡುತ್ತೇವೆ ಎಂಬ ಭರವಸೆ ಕೂಡ ಪಂಚಾಯಿತಿ ಅಧ್ಯಕ್ಷರಿಂದ ಸಿಕ್ಕಿ ಬಿಟ್ಟಿತ್ತು.ಮಹಿಳೆಯರು ಕೊನೆಯಲ್ಲಿ "ನೀಲಮೇಘನಿಗೆ.... ಜೈ", "ನೀಲುವಿಗೆ.... ಜೈ" , " ಮಣ್ಣಿನ ಮಗ ನೀಲುವಿಗೆ... ಜೈ", " ಸಮಾಜ ಸುಧಾರಕ - ಬಡವರ ಬಂಧು - ಆಕಾಶದೀಪ - ಆಶಾಕಿರಣ ನೀಲುವಿಗೆ... ಜೈ" ಅಂತೆಲ್ಲಾ ಸಿಕ್ಕಾಪಟ್ಟೆ ಘೋಷಣೆ ಕೂಗುತ್ತಾ ಖುಷಿಯಿ...
Comments
Post a Comment